ಶರಾವತಿ

ಬಳುಕುತ ಕುಣಿಯುತ ವಯ್ಯಾರದಲಿ
ಗುಡ್ಡಬೆಟ್ಟ ಕೊರಕಲಲಿ ಬರುತಿಹಳು

ಹೆಜ್ಜೆ ಇಟ್ಟಡಿಯಲಿ ನೆಲವು ಅರಳುತಲಿ
ಹಸಿರ ಪೈರನುಟ್ಟಿಹಳು ಸಂಭ್ರಮದಲಿ

ವಿದ್ಯುತ್‌ ಯಂತ್ರಕೆ ನೀನಾದೆ ಮಂತ್ರ
ಕೈಗಾರಿಕೆಗೆ ನೀನಾದೆ ರಾಗ ತಾಳತಂತ್ರ

ಸಾಸಿರ-ಸಾಸಿರ ಕನಸುಗಳ ಕಥನವು
ಭಾವನೆಗಳ ಮನೆ-ಮಠ ಮಂದಿರ ತ್ಯಾಗವಾಗಿಹವು

ಲಿಂಗನಮಕ್ಕಿ ಅಣೆಕಟ್ಟುವಿನಂದು
ನೀ ಚೆಲ್ಲಿದೆ ಬೆಳಕ ಈ ಜಗಕ್ಕೆಂದು

ಅಂಬುತೀರ್ಥದೊಳು ಜನ್ಮತಾಳಿದೆ
ಸಹ್ಯಾದ್ರಿ ನಾಡೊಳು ತಂಪನ್ನೆರದೆ

ಜೋಗದ ಸಿರಿಯೊಂದಿಗೆ
ಶ್ರೀಗಂಧದ ಮೆರುಗು ತಂದೆ ಈ ನಾಡಿಗೆ

ನಮಿಪವು ಅಡಿಕೆ ತೆಂಗುಗಳು ನಿನ್ನಂಘ್ರಿಗೆ
ಹಕ್ಕಿ-ಪಕ್ಕಿ ಕಾಕ-ಪಿಕ ಬಯಸುತಿಹವು ನಿನ್ನೇಳಿಗೆ

ನಿನ್ನೊಲವಿನ ಸಿಂಗರದ ನಲಿವ ನೋಟ
ಈ ನಾಡಿನ ಜಗಕೆ ಹರುಷದ ನೋಟ

ನೀನಾದೆ ಕನ್ನಡಕೆ ಬತ್ತದ ಗಂಗೆ
ಭಾಗ್ಯದ ನಿಧಿ ತಂದೆ ಈ ನಾಡಿಗೆ

ಕರ್ನಾಟಕಕೆ ನೀ ಮುಕುಟವಾದೆ
ಕನ್ನಡ ತಾಯ್ಗೊರಳ ಸರದಲ್ಲಿ ಪದಕವಾದ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಉಳಿದ ದಾರಿ
Next post ಬಸವನ ನಾಡಿನಲಿ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

cheap jordans|wholesale air max|wholesale jordans|wholesale jewelry|wholesale jerseys